Wednesday, May 6, 2009

ಭೂತ-ವರ್ತಮಾನ-ಭವಿಷ್ಯ

ಕಳೆದು ಹೋದ ದಿನಗಳ ಬಗ್ಗೆ
ಯೋಚಿಸಬಾರದು, ಯೋಚಿಸಿ ಏನು
ಮಾಡಲು ಸಾಧ್ಯ? ಹೆಚ್ಚೆಂದರೆ ಹಿಡಿಯ
ಬಲ್ಲೆವು ಆ ಕಳೆದ ಕ್ಷಣಗಳಿಗೆ ಕನ್ನಡಿ.

ಬದುಕು ಭೂತದಲ್ಲಿಲ್ಲ, ಹಾಗೆಂದು
ಅದನು ಭವಿಷ್ಯದಲಿ ಹುಡುಕುವುದು ಸರಿಯಲ್ಲ,
ಜೀವನವ ಇಂದು ಬಾಳಬೇಕು ಗೆಳೆಯಾ,
ವರ್ತಮಾನದ ಬಾಳ್ವೆಯಲಿ ಇಡು ಮುನ್ನಡಿ.

ಇರಬೇಕು ಭವಿಷ್ಯದ ಯೋಚನೆ, ತಪ್ಪಲ್ಲ
ಅದರಲಿ ಮುಳುಗಬಾರದು, ಭವಿಷ್ಯ ನಿಲ್ಲುವುದೇ
ನಮ್ಮ ಇಂದಿನ ವರ್ತಮಾನದ ವರ್ತನೆಯಲಿ, ಅದಕಾಗಿ
ನಿನ್ನ ವರ್ತಮಾನದಿ ಬರೆ ಒಳ್ಳೆಯ ಭವಿಷ್ಯಕೆ ಮುನ್ನುಡಿ.

No comments:

Post a Comment